ಅಭಿಪ್ರಾಯ / ಸಲಹೆಗಳು

ರಚನೆ

ಸಾಂಸ್ಥಿಕ ರಚನೆ ಮತ್ತು ಸಿಬ್ಬಂದಿ :

ಸಿಸ್ಲೆಪ್ ಕರ್ನಾಟಕ ಸೊಸೈಟಿಗಳ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗಿರುವ ಸ್ವಾಯತ್ತ ಸಂಸ್ಥೆ. ಇದರ ಆಗುಹೋಗುಗಳನ್ನು ಆಡಳಿತ, ಕಾರ್ಯನಿರ್ವಾಹಕ ಮಂಡಳಿ, ಶೈಕ್ಷಣಿಕ ಮಂಡಳಿ ಹಾಗೂ ಸಿಬ್ಬಂದಿ ಮತ್ತು ಹಣಕಾಸು ಮಂಡಳಿಗಳು ನಿರ್ವಹಿಸುತ್ತವೆ.

  • ಆಡಳಿತ ಮಂಡಳಿ(ಜಿ.ಸಿ); ಸಿಸ್ಲೆಪ್ನ ಗುರಿ, ಕಾರ್ಯತಂತ್ರ ಮತ್ತು ತಾತ್ತಿತ್ವಕ ತಳಹದಿಯನ್ನು ನಿರ್ದೇಶಿಸುವುದು ಆಡಳಿತ ಮಂಡಳಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವರು ಇದರ ಅಧ್ಯಕ್ಷರಾಗಿದ್ದು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರು, ಸಿಸ್ಲೆಪ್ನ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳಾಗಿ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯ ಯೋಜನಾ ನಿರ್ದೇಶಕರು, ಎಸ್.ಎಸ್.ಎ ಶಿಕ್ಷಣ ತಜ್ಞರು, ನಿರ್ವಹಣೆ ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಮೊದಲಾದ 20 ಜನರು, ಕನಿಷ್ಠ ವರ್ಷಕ್ಕೊಮ್ಮೆ ಸಭೆ ಸೇರುವುದು.
  • ಕಾರ್ಯನಿರ್ವಾಹಕ ಮಂಡಳಿ:(ಇ.ಸಿ): ಸಿಸ್ಲೆಪ್ನ ನಿಗದಿತ ಚಟುವಟಿಗಳ ಉಸ್ತುವಾರಿ ಮತ್ತು ಪ್ರಗತಿ ಪರಿಶೀಲನೆ ಮಾಡುವುದು. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, ಸಿಸ್ಲೆಪ್ನ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳಾಗಿ ಶಿಕ್ಷಣ ಇಲಾಖೆಯ ಆಯುಕ್ತರು, ಶಿಕ್ಷಣ ತಜ್ಞರು, ನಿರ್ವಹಣೆ ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯ ಯೋಜನಾ ನಿರ್ದೇಶಕರು, ಎಸ್.ಎಸ್.ಎ ವಿಶ್ವವಿದ್ಯಾಲಯದ ಕುಲಪತಿಗಳು, ಸರ್ಕಾರದಿಂದ ನಾಮಕರಣಗೊಂಡ ಅಜೀಂ ಪ್ರೇಮ್ ಜಿ ಫೌಂಡೇಷನ್ ಮತ್ತು ಅಕ್ಷರ ಫೌಂಡೇಷನ್ ಪ್ರತಿನಿಧಿಗಳು, ಇಬ್ಬರು ಶಿಕ್ಷಣ ತಜ್ಞರು ಹಾಗೂ ಸಿಸ್ಲೆಪ್ನ ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ 15 ಜನರು. ಮೂರು ತಿಂಗಳಿಗೊಮ್ಮೆ ಸಭೆ ಸೇರುವುದು
  • ಶೈಕ್ಷಣಿಕ ಮಂಡಳಿ:ಸಿಸ್ಲೆಪ್ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ಅದರ ವಿಷಯ ಹಾಗೂ ವಿಧಾನಗಳನ್ನು ನಿರ್ಧರಿಸಿವುದು. ಸಿಸ್ಲೆಪ್ನ ನಿರ್ದೇಶಕರು ಅಧ್ಯಕ್ಷರಾಗಿದ್ದು, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ(ಡಿ.ಎಸ್.ಇ.ಆರ್.ಟಿ) ನಿರ್ದೇಶಕರು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ವಿಭಾಗಗಳ ನಿರ್ದೇಶಕರು, ಜಿಲ್ಲಾ ಶಿಕ್ಷಣ ಮತ್ತು ರಬೇತಿ ಸಂಸ್ಥೆಯ ಒಬ್ಬರು ಪ್ರಾಂಶುಪಾಲರು (ಆವರ್ತನ ಸ್ಥಾನ) ಇದರ ಸದಸ್ಯರು. ಕಾರ್ಯಕ್ರಮ ಸಲಹಾ ಸಮಿತಿಯಂತೆ ಕೆಲಸ ಮಾಡುವ ಈ ಮಂಡಳಿ ಸಿಸ್ಲೆಪ್ನ ಉದ್ದೇಶಗಳನ್ನು ಕಾರ್ಯಚಟುವಟಿಕೆಗಳ ಮೂಲಕ ಸಾಕಾರಗೊಳಿಸುತ್ತದೆ. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಅಗತ್ಯವಿದ್ದಲ್ಲಿ ಎಷ್ಟು ಬಾರಿಯಾದರೂ ಸಭೆ ಸೇರಬಹುದು.
  • ಸಿಬ್ಬಂದಿ ಮತ್ತು ಹಣಕಾಸು ಮಂಡಳಿ: ಸಿಸ್ಲೆಪ್ನ ಆಯವ್ಯಯ ರೂಪಿಸುವುದು, ಸಿಬ್ಬಂದಿಗಳ ನೇಮಕ, ಸೇವಾ ನಿಯಮಗಳನ್ನು ರೂಪಿಸುವುದ, ಕಟ್ಟಡ ಮತ್ತು ಇತರೆ ಮೂಲಭೂತ ಸೌಕರ್ಯಗಳ ಉಸ್ತುವಾರಿ, ಮೊದಲಾದವು ಈ ಮಂಡಳಿಯ ಜವಾಬ್ದಾರಿ

ನೆಲೆ:

  • ಶೈಕ್ಷಣಿಕ ವಿಕೇಂದ್ರಿಕರಣದ ಆಶಯಕ್ಕೆ ಪೂರಕವಾಗಿ ಸಿಸ್ಲೆಪ್ ಅನ್ನು ಧಾರವಾಡದಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ 2.5 ಎಕರೆ ನಿವೇಶನ ಒದಗಿಸಲಾಗಿದೆ. ಇಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ, ವಸತಿ ವ್ಯವಸ್ಥೆ, ಕ್ರೀಡಾ ಸಮುಚ್ಚಯ ಒಳಗೊಂಡಂತಹ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಡಯಟ್ನ ಆವರಣದಲ್ಲಿರುವ ನೂರೈವತ್ತು ವರ್ಷಗಳ ಇತಿಹಾಸ ಇರುವ ನೂಲು ಮತ್ತು ನೇಯ್ಗೆ ತರಬೇತಿ ಕಟ್ಟಡದಲ್ಲಿ ಸಂಸ್ಥೆಯನ್ನು ನೆಲೆಗೊಳಿಸಲಾಗಿದೆ
  • ಸಿಸ್ ಲಿಪ್ ಸ್ಥಾಪನೆಗಾಗಿ ಕೇಂದ್ರ ಸರ್ಕಾರವು ಮೂರು ಕೋಟಿ ರೂಪಾಯಿಗಳ ಅನುದಾನ ಒದಗಿಸಿದೆ. ಉಳಿದ ಖರ್ಚು ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ

ಇತ್ತೀಚಿನ ನವೀಕರಣ​ : 05-09-2020 02:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ರಾಜ್ಯ ಸಂಸ್ಥೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080